Slide
Slide
Slide
previous arrow
next arrow

ಕೊಳಗೀಬೀಸ್‌ನಲ್ಲಿ ಶ್ರೀಧರ ಸ್ವಾಮಿಗಳ ಆರಾಧನಾ ಮಹೋತ್ಸವ

300x250 AD

ಶಿರಸಿ: ಭಗವಾನ್ ಶ್ರೀ ಶ್ರೀಧರ ಸ್ವಾಮಿಯವರ 51ನೇ ಆರಾಧನೆ ಮಹೋತ್ಸವವನ್ನು ಶ್ರೀ ಕ್ಷೇತ್ರ ಕೊಳಗಿಬೀಸ್ ನಲ್ಲಿ ಭಕ್ತಿ-ಭಾವಗಳಿಂದ ಆಚರಿಸಲಾಯಿತು.

ಕೊಳಗಿಬೀಸ್ ನ ಮಾರುತಿ ದೇವಳದಲ್ಲಿ ನಡೆದ ಆರಾಧನೆ ಮಹೋತ್ಸವದಲ್ಲಿ, ಶ್ರೀಧರ ಸ್ವಾಮಿಗಳ ಪಾದುಕೆಗೆ 32000 ತುಳಸಿಯನ್ನು ಭಕ್ತರು ,ವೈದಿಕರು ಸ್ತೋತ್ರದೊಂದಿಗೆ ಅರ್ಪಿಸಿ ಧನ್ಯರಾದರು.ನಂತರ ಪಾದುಕಾ ಪೂಜೆಯಲ್ಲಿ ಮಾತೆಯರು ದೀಪವನ್ನು ಬೆಳಗಿಸಿದರು. ದೇವಸ್ಥಾನದ ಮುಖ್ಯ ಅರ್ಚಕ ವೇ.ಮೂ. ಕುಮಾರ ಭಟ್ಟ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಧರ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top